ಮುಂಬೈ ತೀಯ ಸಮಾಜದ ಸ್ಥಾಪಕ ಸದಸ್ಯ ಉದ್ಯಾವರ ಮಾನಿಂಜ ನಿವಾಸಿ ನಾರಾಯಣ (77) ನಿಧನ.
ಫೆಬ್ರವರಿ 07, 2024
0
ಮುಂಬೈ ತೀಯ ಸಮಾಜದ ಸ್ಥಾಪಕ ಸದಸ್ಯ ಉದ್ಯಾವರ ಮಾನಿಂಜ ನಿವಾಸಿ ನಾರಾಯಣ (77) ನಿಧನ.
ಮಂಜೇಶ್ವರ: ಮುಂಬೈ ತೀಯ ಸಮಾಜದ ಸ್ಥಾಪಕ ಸದಸ್ಯರಾಗಿರುವ ಉದ್ಯಾವರ ಮಾನಿಂಜ ನಿವಾಸಿ ನಾರಾಯಣ (77) ನಿಧನರಾದರು. ಮೃತರು ಮುಂಬೈಯ ಗಾಡ್ಕೋಪರ್ ನಲ್ಲಿ 60 ವರ್ಷಗಳ ಕಾಲ ಖಾಸಗಿ ಉದ್ಯೋಗದಲ್ಲಿದ್ದು, ಬಳಿಕ ಊರಿಗೆ ಆಗಮಿಸಿದ್ದರು. ಪತ್ನಿ: ಧಾರ್ಮಿಕ, ಸಾಮಾಜಿಕ ಮುಂದಾಳು ವಿಮಲಾ ನಾರಾಯಣ್, ಮಕ್ಕಳಾದ: ಪ್ರಶಾಂತ್ ಮುಂಬೈ, ಉಮಾವತಿ, ಸುಮಾ, ಸೊಸೆ: ರಶ್ಮಿ ಕೊಲ್ಯ, ಅಳಿಯಂದಿರಾದ: ಜಗದೀಶ್ ಮಾಡೂರು, ರೋಹಿತ್ ದುಬೈ, ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ಕನಿಲ ಶ್ರೀ ಭಗವತೀ ಕ್ಷೇತ್ರದ ಸೇವಾ ಸಂಘ, ವಿ.ಎಚ್. ಪಿ. ಮಾತೃ ಮಂಡಳಿ ಮಂಜೇಶ್ವರ, ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ ಸಂತಾಪ ಸೂಚಿಸಿದ್ದಾರೆ. ಮೃತರ ಅಂತ್ಯ ಕ್ರಿಯೆ ಇಂದು ಸಂಜೆ 5.00 ಗಂಟೆಗೆ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ.