ಕಾಂ. ಬಿ.ಎಂ ರಾಮಯ್ಯ ಶೆಟ್ಟಿಯವರ 21 ನೇ ಚರಮ ದಿನ. ಸ್ಮಾರಕ ಮಂಟಪದಲ್ಲಿ ಪುಷ್ಪ ನಮನ.
ಜನವರಿ 01, 2024
0
ಕಾಂ. ಬಿ.ಎಂ ರಾಮಯ್ಯ ಶೆಟ್ಟಿಯವರ 21 ನೇ ಚರಮ ದಿನ. ಸ್ಮಾರಕ ಮಂಟಪದಲ್ಲಿ ಪುಷ್ಪ ನಮನ.
ಮಂಜೇಶ್ವರ: ಸಿ.ಪಿ.ಐ.ಎಂ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಸಿ.ಪಿ.ಐ.ಎಂ ಮಂಡಲ ಕಾರ್ಯದರ್ಶಿಯಾಗಿಯೂ, ಪ್ರಧಾನ ಪಾತ್ರ ವಹಿಸಿ ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿಯೂ, ಜಿಲ್ಲಾ ಪಂಚಾಯತ್ ಸ್ಥಾಯೀ ಸಮಿತಿ ಸದಸ್ಯರಾಗಿಯೂ, ಸಹಕಾರ ರಂಗದಲ್ಲೂ ಸೇವೆ ಸಲ್ಲಿಸಿದ ಕಾಂ. ಬಿ.ಎಂ ರಾಮಯ್ಯ ಶೆಟ್ಟಿಯವರ 21 ನೇ ಚರಮ ದಿನ ಸ್ಮಾರಕ ಮಂಟಪದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಸಿ.ಪಿ.ಐ.ಎಂ ಮಂಜೇಶ್ವರ ಏರಿಯಾ ಕಾರ್ಯದರ್ಶಿ ಕಾಂ ಕೆ. ವಿ ಕುಂಹಿರಾಮನ್ ಉದ್ಘಾಟಿಸಿ, ಮಾತನಾಡಿದರು. ಕಾಂ. ಕೆ .ಆರ್ ಜಯಾನಂದ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ರಾಮಯ್ಯ ಶೆಟ್ಟಿಯವರ ಧರ್ಮಪತ್ನಿ ವಾರಿಜ ಶೆಟ್ಟಿ ಉಪಸ್ಥಿತರಿದ್ದರು. ಕಾಂ.ಕೆ ಕಮಲಾಕ್ಷ ಸ್ವಾಗತಿಸಿದರು.