ಬದಿಯಡ್ಕ ಮೇಲಿನ ಪೇಟೆ ನಿವಾಸಿ ದಿನೇಶ್ ಆಚಾರ್ಯ (36) ನೇಣು ಬಿಗಿದು ಆತ್ಮಹತ್ಯೆ.
ಡಿಸೆಂಬರ್ 29, 2023
0
ಬದಿಯಡ್ಕ ಮೇಲಿನ ಪೇಟೆ ನಿವಾಸಿ ದಿನೇಶ್ ಆಚಾರ್ಯ (36) ನೇಣು ಬಿಗಿದು ಆತ್ಮಹತ್ಯೆ.
ಬದಿಯಡ್ಕ: ಮೇಲಿನ ಪೇಟೆ ನಿವಾಸಿ ದಿ. ಗೋಪಾಲ ಆಚಾರ್ಯ ರ ಪುತ್ರ ದಿನೇಶ್ ಆಚಾರ್ಯ (36) ಎಂಬವರು ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಇಂದು ಬೆಳಗ್ಗೆ ಪತ್ತೆಯಾಗಿದ್ದಾರೆ. ಇವರ ಮೃತದೇಹ ಬದಿಯಡ್ಕ ಮೇಲಿನ ಪೇಟೆಯಲ್ಲಿರುವ "ಶ್ರೀ ಮೂಕಾಂಬಿಕ ಸರ್ವಿಸ್ ಸ್ಟೇಷನ್" ನ ಹಿಂಭಾಗದ ಸೀಟ್ ನ ಹ್ಯಂಗ್ಲಾರ್ ಗೆ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಕಂಡುಬಂದಿದ್ದು, ಕೂಡಲೇ ಕಂಡವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದೀಗ ಮೃತದೇಹವನ್ನು ಕಾಸರಗೋಡಿನ ಸರಕಾರಿ ಆಸ್ಪತ್ರೆಯ ಶವಮಹಜರಿಗೆ ದಾಖಲಿಸಲಾಗಿದೆ. ಮೃತರು ತಾಯಿ: ವೇದಾವತಿ, ಪತ್ನಿ: ಚಿತ್ರ, ಸಹೋದರ - ಸಹೋದರಿಯರಾದ ವಿಶ್ವನಾಥ ಆಚಾರ್ಯ, ಪುಷ್ಪರಾಜ ಆಚಾರ್ಯ, ಪುಂಡರಿಕ ಆಚಾರ್ಯ, ಸತೀಶ್ ಆಚಾರ್ಯ, ಚಂದ್ರಕಾಂತ ಆಚಾರ್ಯ, ಹೇಮಲತಾ, ವತ್ಸಲಾ, ರಾಜೇಶ್ವರೀ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರಿಗೆ ಮಕ್ಕಳಿಲ್ಲ. ಮೃತರು ಈ ಹಿಂದೆ ಗ್ಯಾರೇಜ್ ನ ಪಾರ್ಟ್ಸ್ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಆತ್ಮಹತ್ಯೆಗೈಯಲು ಕಾರಣ ಏನೆಂಬುದು ತಿಳಿದು ಬಂದಿಲ್ಲ.