ಡಿಸೆಂಬರ್ 31 ರಿಂದ ಫೆಬ್ರವರಿ 11 ರ ವರೆಗೆ ಮಧೂರು ಶ್ರೀ ಕಾಳಿಕಾಂಬಾ ಮಠದಲ್ಲಿ "ಶ್ರೀ ವಿಶ್ವರೂಪಂ ಯುವ ಸಮಾವೇಶ". ಕುಲ ಗುರುಗಳಾದ ಪರಮಪೂಜ್ಯ ಶ್ರೀ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದ "ವಿಶ್ವರೂಪಂ" ಕಾರ್ಯಕ್ರಮ ಸಂಘಟಕರು.
ಜನವರಿ 02, 2024
0
ಡಿಸೆಂಬರ್ 31 ರಿಂದ ಫೆಬ್ರವರಿ 11 ರ ವರೆಗೆ ಮಧೂರು ಶ್ರೀ ಕಾಳಿಕಾಂಬಾ ಮಠದಲ್ಲಿ "ಶ್ರೀ ವಿಶ್ವರೂಪಂ ಯುವ ಸಮಾವೇಶ".
ಕುಲ ಗುರುಗಳಾದ ಪರಮಪೂಜ್ಯ ಶ್ರೀ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದ "ವಿಶ್ವರೂಪಂ" ಕಾರ್ಯಕ್ರಮ ಸಂಘಟಕರು.
ಉಡುಪಿ: ಡಿಸೆಂಬರ್ 31 ರಿಂದ ಫೆಬ್ರವರಿ 11 ರ ವರೆಗೆ ಮಧೂರು ಶ್ರೀ ಕಾಳಿಕಾಂಬಾ ಮಠದಲ್ಲಿ ನಡೆಯಲಿರುವ "ಶ್ರೀ ವಿಶ್ವರೂಪಂ ಯುವ ಸಮಾವೇಶ" ದ ಪೂರ್ವಭಾವಿ ಕ್ರೀಡಾ ಸ್ಪರ್ಧೆ 31 ರಿಂದ ಉದ್ಘಾಟನೆಗೊಂಡು 2024 ಫೆಬ್ರವರಿ 11ರಂದು ನಡೆಯುವ ಸಮಾವೇಶದಂದು ಸಂಪನ್ನಗೊಳ್ಳಲಿದೆ. ಈ ಸಂಪೂರ್ಣ ಕಾರ್ಯಕ್ರಮದ ರೂಪುರೇಷೆಯ ಬಗ್ಗೆ ಕಾರ್ಯಕ್ರಮ ಆಯೋಜಕರ ನಿಯೋಗ ಇಂದು ಉಡುಪಿ ಪಡುಕುತ್ಯಾರುವಿನಲ್ಲಿರುವ ಕುಲ ಗುರುಗಳಾದ ಪರಮಪೂಜ್ಯ ಶ್ರೀ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿಯವರನ್ನು ಭೇಟಿಯಾಗಿ, ಕಾರ್ಯಕ್ರಮಗಳ ಸಂಕ್ಷಿಪ್ತ ವಿವರವನ್ನ ತಿಳಿಸಿ, ಅಭಿಪ್ರಾಯವನ್ನ ವ್ಯಕ್ತಪಡಿಸಿದರು. ವಿಷಯ ಮನಗಂಡ ಗುರುವರ್ಯರು "ಸಮಾಜದ ಯುವ ಸಮೂಹದ ಒಗ್ಗೂಡುವಿಕೆಗೆ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಆಯೋಜಕರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರು". ಸಂಯೋಜಿತವಾದ ಕಾರ್ಯಕ್ರಮಕ್ಕೆ ಗುರುಗಳು ಫಲ ಮಂತ್ರಾಕ್ಷತೆಯ ಶುಭಾಶೀರ್ವಾದವಿತ್ತರು. ಈ ವೇಳೆ ವಿಶ್ವ ಬ್ರಾಹ್ಮಣ ಯುವಕ ಸಂಘದ ಅಧ್ಯಕ್ಷರಾದ ಮಹೇಶ್ ಆಚಾರ್ಯ ಮಧೂರು, ಉಪಾಧ್ಯಕ್ಷರಾದ ಅಮೈ ಗಣೇಶ್ ಆಚಾರ್ಯ, ಜತೆ ಕಾರ್ಯದರ್ಶಿ ಮೌನೇಶ್ ಆಚಾರ್ಯ ಜೆ.ಪಿ ನಗರ, ವಿಶ್ವ ರೂಪಂ ಯುವ ಸಮಾವೇಶದ ಆರ್ಥಿಕ ಸಮಿತಿಯ ಸಂಚಾಲಕರಾದ ಶೀತಲ್ ಆಚಾರ್ಯ ಕಾಸರಗೋಡು, ಭರತ್ ಆರ್. ಆಚಾರ್ಯ ಕರಂದಕ್ಕಾಡ್ ಉಪಸ್ಥಿತರಿದ್ದರು.