ಕ್ಯಾಂಪ್ಕೋ " ಸಾಂತ್ವನ " ಯೋಜನೆಯಡಿಯಲ್ಲಿ ಧನಸಹಾಯ ಹಸ್ತಾಂತರ.
ಜೂನ್ 07, 2025
0
ಕ್ಯಾಂಪ್ಕೋ " ಸಾಂತ್ವನ " ಯೋಜನೆಯಡಿಯಲ್ಲಿ ಧನಸಹಾಯ ಹಸ್ತಾಂತರ.
ಬದಿಯಡ್ಕ: ಕ್ಯಾಂಪ್ಕೋ ಸಂಸ್ಥೆಯ "ಸಾಂತ್ವನ" ಯೋಜನೆಯಡಿಯಲ್ಲಿ ಕ್ಯಾಂಪ್ಕೋ ಬದಿಯಡ್ಕ ಶಾಖೆಯ ಸಕ್ರಿಯ ಸದಸ್ಯರಾದ ಬಾಬು ಪಾಠಾಳಿ ಅವರ ತೆರೆದ ಹೃದಯ ಶಸ್ತ್ರ ಚಿಕೆತ್ಸೆಯ ಚಿಕಿತ್ಸಾ ವೆಚ್ಚದ ಸಹಾಯಧನ ರೂಪಾಯಿ 2,00,000/- ವನ್ನು ಕ್ಯಾಂಪ್ಕೋ ಉಪಾಧ್ಯಕ್ಷರಾದ ಶ್ರೀ ಶಂಕರನಾರಾಯಣ ಖಂಡಿಗೆ ಅವರು ಹಸ್ತಾಂತರಿಸಿದರು. ಕ್ಯಾಂಪ್ಕೋ ಸಂಸ್ಥೆಯ ಬದಿಯಡ್ಕ ಪ್ರಾದೇಶಿಕ ವ್ಯವಸ್ಥಾಪಕರಾದ ಚಂದ್ರ ಎಂ, ಕ್ಯಾಂಪ್ಕೋ ಬದಿಯಡ್ಕ ಶಾಖಾ ವ್ಯವಸ್ಥಾಪಕರಾದ ಶ್ಯಾಂ ಪ್ರಶಾಂತ ಅವರ ಸಮ್ಮುಖದಲ್ಲಿ ಫಲಾನುಭವಿಗಳ ಮನೆಗೆ ತೆರಳಿ ಹಸ್ತಾಂತರಿಸಿದರು.