ಕರ್ನಾಟಕದ ಮಂಡ್ಯ ಜಿಲ್ಲೆಯ ಪಾಂಡವಪುರದ ನಿವಾಸಿ ಮೆಕ್ಯಾನಿಕ್ ವೃತ್ತಿಯ ಅಲ್ತಾಫ್ ಗೆ ಒಲಿಯಿತು ಕೇರಳದ ಓಣಂ ಬಂಪರ್ ಲಾಟರಿ 25 ಕೋಟಿ ರೂಪಾಯಿ..
ಅಕ್ಟೋಬರ್ 10, 2024
0
ಕರ್ನಾಟಕದ ಮಂಡ್ಯ ಜಿಲ್ಲೆಯ ಪಾಂಡವಪುರದ ನಿವಾಸಿ ಮೆಕ್ಯಾನಿಕ್ ವೃತ್ತಿಯ ಅಲ್ತಾಫ್ ಗೆ ಒಲಿಯಿತು ಕೇರಳದ ಓಣಂ ಬಂಪರ್ ಲಾಟರಿ 25 ಕೋಟಿ ರೂಪಾಯಿ..
ತಿರುವನಂತಪುರ: ನಿನ್ನೆ ನಡೆದ ಕೇರಳ ರಾಜ್ಯ ಓಣಂ ಬಂಪರ್ ಲಾಟರಿಯಲ್ಲಿ ಕರ್ನಾಟಕದ ಮಂಡ್ಯದ ವ್ಯಕ್ತಿಗೆ ಪ್ರಥಮ ಬಹುಮಾನ 25 ಕೋಟಿ ಒಲಿದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮಂಡ್ಯದ ಪಾಂಡವಪುರ ಪಟ್ಟಣದ ಸ್ಕೂಟರ್ ಮೆಕಾನಿಕ್ ಅಲ್ತಾಫ್ ರವರು ಖರೀದಿಸಿದ ಟಿಕೆಟ್ ಅದೃಷ್ಟ ಒಲಿದು ಬಂದಿದೆ. ಇತ್ತೀಚೇಗೆ ಕೆಲಸ ನಿಮ್ಮಿತ ಕೇರಳಕ್ಕೆ ಹೋಗಿದ್ದ ವೇಳೆ 500 ರೂ ಕೊಟ್ಟು ಲಾಟರಿ ಖರೀದಿ ಮಾಡಿದ್ದರು. ಅಲ್ತಾಫ್ ಖರೀದಿಸಿದ್ದ ಆ ಲಾಟರಿ ಟಿಕೇಟ್ ಗೆ ಇದೀಗ 25 ಕೋಟಿ ರೂ ಬಂಪರ್ ಬಹುಮಾನ ಬಂದಿರುತ್ತದೆ. ಇವರಿಗೆ ಕೇರಳ ಸರಕಾರದ ತೆರಿಗೆ ಕಳೆದು ಸುಮಾರು 17.5 ಕೋಟಿ ರೂ ಲಭಿಸಲಿದೆ. ಇದೀಗ ಅಲ್ತಾಪ್ ಹಾಗೂ ಕುಟುಂಬದವರು ಹಣ ಪಡೆಯಲು ಕೇರಳಕ್ಕೆ ದೌಡಾಯಿಸಿದ್ದಾರೆ.