ಮೀಂಜ: ಮಂಡಲ ಕಾಂಗ್ರೆಸ್ ನೂತನ ಕಚೇರಿ ಉದ್ಘಾಟನೆ.
ಜನವರಿ 19, 2025
0
ಮೀಂಜ ಮಂಡಲ ಕಾಂಗ್ರೆಸ್ ನೂತನ ಕಚೇರಿ ಉದ್ಘಾಟನೆ.
ಮಂಜೇಶ್ವರ: ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಇದರ ಮೀಂಜ ಮಂಡಲ ಸಮಿತಿಯ ನೂತನ ಕಚೇರಿಯ ಉದ್ಘಾಟನೆಯನ್ನು ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಅವರು ನಿರ್ವಹಿಸಿದರು. ಮಂಡಲ ಕಾಂಗ್ರೆಸ್ ಅಧ್ಯಕ್ಷ ದಾಮೋದರ ಮಾಸ್ತರ್ ಕೆ. ಅವರು ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಕೆಪಿಸಿಸಿ ಸದಸ್ಯ ಹಕೀಂ ಕುನ್ನಿಲ್, ಮಾಜಿ ಕೆಪಿಸಿಸಿ ಸದಸ್ಯ ಡಿ. ಪ್ರಭಾಕರ ಚೌಟ, ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಡಿಎಂಕೆ, ಮಾಜೀ ಅಧ್ಯಕ್ಷ ಪಿ ಸೋಮಪ್ಪ, ಕಾಸರಗೋಡು ಜಿಲ್ಲಾ ಪಂಚಾಯತು ಸದಸ್ಯ ಶ್ರೀಮತಿ ಕಮಲಾಕ್ಷಿ, ಜಿಲ್ಲಾ ಪಂಚಾಯತ್ ಮಾಜಿ ನ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಮುಂತಾದವರು ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವರ್ಕಾಡಿ ಮಂಡಲ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಪುರುಷೋತ್ತಮ ಅರಿಬೈಲು, ಮಂಜೇಶ್ವರ ಮಂಡಲ ಅಧ್ಯಕ್ಷ ಹನೀಫ್ ಪಡಿಂಞಾರ್, ಯೂತ್ ಕಾಂಗ್ರೆಸ್ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಆರಿಫ್ ಮಚ್ಚಂಪಾಡಿ, ಡಿಕೆಟಿಎಫ್ ಮಂಜೇಶ್ವರ ಬ್ಲಾಕ್ ಅಧ್ಯಕ್ಷ ಹಮೀದ್ ಕಣಿಯೂರು, ಮುಸ್ಲಿಂ ಲೀಗ್ ಮುಖಂಡರಾದ ಉಮ್ಮರ್ ಸೂಫಿ ಮಜಿಬೈಲು, ಮೊಹಮ್ಮದ್ ಕುಂಞ ಜೆ.ಎಂ, ಸಿದ್ದೀಕ್ ಮೀಯಪದವು, ಕಾಯಿಂಞ ಹಾಜಿ ತಲೆಕಳ, ಮೊಹಮ್ಮದ್ ಜೆ, ಮುಸ್ತಾಕ್ ಹಾಜೀ ಮುನ್ನಿಪಾಡಿ, ಶಾಂತರಾಮ ಶೆಟ್ಟಿ ಬೆಜ್ಜ, ನೇತಾರರಾದ ಅಝೀಝ್ ಕಲ್ಲೂರು, ಜೋಕಿಂ ಮೋಂತೇರೊ, ಉಮ್ಮರ್ ಬೆಜ್ಜ, ಡೆಂಜಿಲ್ ಡಿ'ಸೋಜ, ಅಶ್ರಫ್, ಶೇಕ್ ಅಬ್ಬಾಸ್, ಫ್ಯಾನ್ಸಿಸ್ ಢಿ.ಸೋಜ, ಸೀತಾರಾಮ ಬೇರಿಕೆ, ಅಹ್ಮದ್,ಮಮ್ಮುಂಞ, ದೂಜಾ ಡಿ'ಸೋಜ, ಮೊಹಮ್ಮದ್ ಮೀಯಪದವು, ಕಟ್ಟಡ ಮಾಲೀಕ ಅಬೂಬಕ್ಕರ್, ಇನಾಸ್ ಡಿ''ಸೋಜ, ಬಾತಿಸ್ ತಲೆಕ್ಕಿ, ಶರೀಫ್ ತಲೆಕ್ಕಿ, ಅಬ್ದುಲ್ಲ ಜೆ.ಎಂ, ಲತೀಫ್ ಕುಳಬೈಲು, ನಾರಾಯಣ ಕುಳೂರು, ಇಬ್ರಾಹಿಂ ಅಡ್ಕ, ಅಬೂಬಕ್ಕರ್ ಸಿದ್ದಿಕ್, ಮೊಯ್ದಿನ್ ಕುಂಞ, ಯಾಹ್ಯಾ, ಹನೀಫ್, ಮುಂತಾದವರು ಉಪಸ್ಥಿತರಿದ್ದರು. ಕಂಚಿಲ ಮೊಹಮ್ಮದ್ ಸ್ವಾಗತಿಸಿ, ಬಿ.ಕೆ ಮೊಹಮ್ಮದ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹನೀಫ್ ಎಚ್. ಎ ವಂದಿಸಿದರು.