ಶಿಕ್ಷಕರಲ್ಲಿ ಧನಾತ್ಮಕವಾದ ಚಿಂತನೆಯನ್ನು ತರುವುದರೊಂದಿಗೆ ಮಕ್ಕಳಲ್ಲಿ ಭೌದ್ಧಿಕ ಚಿಂತನೆಯನ್ನು ವೃದ್ಧಿಸಲು ಶಿಕ್ಷಕರು ಸನ್ನದ್ಧರಾಗಬೇಕು. - ಶಿಕಾರಿಪುರ ಕೃಷ್ಣಮೂರ್ತಿ.
ಜನವರಿ 11, 2025
0
ಶಿಕ್ಷಕರಲ್ಲಿ ಧನಾತ್ಮಕವಾದ ಚಿಂತನೆಯನ್ನು ತರುವುದರೊಂದಿಗೆ ಮಕ್ಕಳಲ್ಲಿ ಭೌದ್ಧಿಕ ಚಿಂತನೆಯನ್ನು ವೃದ್ಧಿಸಲು ಶಿಕ್ಷಕರು ಸನ್ನದ್ಧರಾಗಬೇಕು. - ಶಿಕಾರಿಪುರ ಕೃಷ್ಣಮೂರ್ತಿ.
ಕಾಸರಗೋಡು: ಶಿಕ್ಷಕರಲ್ಲಿ ಧನಾತ್ಮಕವಾದ ಚಿಂತನೆಯನ್ನು ತರವುದರೊಂದಿಗೆ ಮಕ್ಕಳಲ್ಲಿ ಭೌದ್ಧಿಕ ಚಿಂತನೆಯನ್ನು ವೃದ್ಧಿಸಲು ಶಿಕ್ಷಕರು ಸನ್ನದ್ಧರಾಗಿರಬೇಕೆಂದು ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ವಿಶ್ರಾಂತ ಉಪನ್ಯಾಸಕ ಶಿಖಾರಿಪುರ ಕೃಷ್ಣಮೂರ್ತಿ ನುಡಿದರು. ಅವರು ಇಂದು ಬೆಳಗ್ಗೆ ಕಾಸರಗೋಡು ನಗರಸಭಾ ಸಭಾಂಗಣದಲ್ಲಿ ನಡೆಯುತ್ತಿರುವ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ರಾಜ್ಯ ಸಮ್ಮೇಳನದ ದ್ವಿತೀಯ ದಿನದಂಗವಾಗಿ ನಡೆಯುತ್ತಿರುವ ವಿದಾಯಕೂಟ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಕನ್ನಡ ಮಾಧ್ಯಮ ಅಧ್ಯಾಪಕರ ಸಂಘವು ಒಂದು ಹೆಮ್ಮರದಂತೆ ಕಾರ್ಯ ನಿರ್ವಹಿಸುತ್ತಿದ್ದು, ಇದರ ಬೇರುಗಳು ಎಲ್ಲೆಡೆ ಹರಡಿ ನೀರನ್ನು ಹೀರುವಂತೆ ಎಲ್ಲರನ್ನೂ ಸಂಘಟಿಸಬೇಕು. ಕನ್ನಡ ಶಾಲೆಗಳಿಗೆ ಇರುವ ಸವಾಲುಗಳನ್ನು ಎದುರಿಸಲು ಹಾಗೂ ಅದಕ್ಕೆ ಬೇಕಾದ ತರಬೇತಿಯನ್ನು ನೀಡಲು ಭರವಸೆ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಅಧ್ಯಕ್ಷ ಶ್ರೀನಿವಾಸ್ ರಾವ್ ರವರು ವಹಿಸಿದ್ದರು. ವೇದಿಕೆಯಲ್ಲಿ ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿ ದಿನೇಶ್ ವಿ, ಕಾಞಂಗಾಡ್ ಜಿಲ್ಲಾ ಶಿಕ್ಷಣಾಧಿಕಾರಿ ಅರವಿಂದ ಕೆ, ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ರಾಜಗೋಪಾಲ ಎನ್, ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಶಶಿಧರ ಎಂ, ಕಾಸರಗೋಡು ಉಪಜಿಲ್ಲಾ ಶಿಕ್ಷಣಾಧಿಕಾರಿ ಅಗಸ್ಟಿನ್ ಬರ್ನಾಡ್, ನಿವೃತ್ತ ಜಿಲ್ಲಾ ಶಿಕ್ಷಣ ಉಪನಿರ್ದೇಶಕರಾದ ಮಹಾಲಿಂಗೇಶ್ವರ ರಾಜ್, ನಿವೃತ್ತ ಜಿಲ್ಲಾ ಶಿಕ್ಷಣ ಉಪ ನಿರ್ದೇಶಕರಾದ ನಂದಿಕೇಶನ್ ಎಸ್, ಮಾಜಿ ಕೇಂದ್ರ ಸಮಿತಿ ಅಧ್ಯಕ್ಷ ಸತೀಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಶುಭಾಸಂಶನೆಗೈದರು. ಸಂಘದ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳ, ಸಂಘದ ಅಧಿಕೃತ ವಕ್ತಾರ ಸುಖೇಶ್ ಎ, ಕೋಶಾಧಿಕಾರಿ: ಶರತ್ ಕುಮಾರ್ ಎಂ ಉಪಸ್ಥಿತರಿದ್ದರು. ಶಿಕ್ಷಕಿಯರಾದ ಅನುಷಾ ಎಸ್, ಸುಷ್ಮಾ ಕೆ, ಸ್ವಾತಿ ಪಿ, ಯಕ್ಷಿತ ಯು, ಪ್ರಾರ್ಥನೆ ಹಾಡಿದರು. ಸಂಘದ ಕಾರ್ಯದರ್ಶಿ ಜೀವನ್ ಕುಮಾರ್ ಕೆ ಸ್ವಾಗತಿಸಿ, ಸ್ವಾಗತ ಸಮಿತಿ ಸಂಚಾಲಕಿ ಶ್ರೀಮತಿ ಚಂದ್ರಿಕಾ ಹಾಗೂ ಕೇಂದ್ರ ಸಮಿತಿ ಕಾರ್ಯದರ್ಶಿ ಜಯಪ್ರಶಾಂತ್ ಪಾಲೆಂಗ್ರಿ ನಿರೂಪಿಸಿದರು. ಮಧ್ಯಾಹ್ನ ಬಳಿಕ ಪ್ರತಿನಿಧಿ ಸಮ್ಮೇಳನ ನಡೆಯಿತು. ನಿನ್ನೆ ನಡೆದ ಸಮ್ಮೇಳನದ ಉದ್ಘಾಟನೆಯನ್ನು ಕಾಸರಗೋಡು ಶಾಸಕರಾದ ಎನ್. ಎ ನೆಲ್ಲಿಕ್ಕುನ್ನುರವರು ದೀಪ ಬೆಳಗಿಸಿ ಚಾಲನೆ ನೀಡಿದರು. ಸಮಾರಂಭದಲ್ಲಿ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಅಧ್ಯಕ್ಷ ಶ್ರೀನಿವಾಸ ರಾವ್ ಅಧ್ಯಕ್ಷತೆ ವಹಿಸಿದ್ದರು. ವಿಶೇಷ ಅತಿಥಿಯಾಗಿ ಉದುಮ ಶಾಸಕ ಸಿ.ಎಚ್. ಕುಂಇಂಬು ಭಾಗವಹಿಸಿದರು. ಈ ವೇಳೆ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕೆಲೆಂಡರ್ ನ್ನು ಮುಖ್ಯ ಅತಿಥಿಗಳಾದ ಮಹಾಬಲೇಶ್ವರ ರಾವ್ ಉಡುಪಿ ಬಿಡುಗಡೆಗೊಳಿಸಿ,
ಪ್ರಧಾನ ಭಾಷಣ ಮಾಡಿದರು. ಕನ್ನಡ ವ್ಯವಸ್ಥಾಪಕರ ಸಂಘಟನೆ ಅಧ್ಯಕ್ಷ ಜಯದೇವ ಖಂಡಿಗೆ, ನಿವೃತ್ತ ಜಿಲ್ಲಾ ಶಿಕ್ಷಣ ಉಪ ನಿರ್ದೇಶಕರಾದ ನಂದಿಕೇಶನ್, ಸಂಘದ ಮಾಜಿ ಅಧ್ಯಕ್ಷ ಟಿ.ಡಿ ಸದಾಶಿವ ರಾವ್, ಪ್ರಭಾವತಿ ಕೆದಿಲಾಯ ಪುಂಡೂರು, ಸಂಘದ ಕಾಸರಗೋಡು ಉಪಜಿಲ್ಲಾ ಅಧ್ಯಕ್ಷೆ ಶ್ರೀಮತಿ ಯಶೋಧಾ, ಮಂಜೇಶ್ವರ ಉಪಜಿಲ್ಲಾ ಅಧ್ಯಕ್ಷ ಜಯರಾಮ ಸಿ.ಎಚ್, ಕುಂಬಳೆ ಉಪಜಿಲ್ಲಾ ಅಧ್ಯಕ್ಷ ಶ್ರೀಶ ಕುಮಾರ, ಬೇಕಲ ಉಪಜಿಲ್ಲಾ ಅಧ್ಯಕ್ಷ ಶ್ರೀಮತಿ ರಜನಿ ಕುಮಾರಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 33 ಮಂದಿ ಅಧ್ಯಾಪಕ, ಅಧ್ಯಾಪಿಕೆಯರ ಸ್ವಾಗತ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಸಂಘದ ಅಧಿಕೃತ ವಕ್ತಾರ ಸುಖೇಶ್ ಎ. ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ಜಬ್ಬಾರ್ ಬಿ ನಿರೂಪಿಸಿ, ಸಂಘದ ಕೋಶಾಧಿಕಾರಿ ಶರತ್ ಕುಮಾರ್ ವಂದಿಸಿದರು. ಕಾರ್ಯಕ್ರಮದ ಮುಂಚಿತ ಬೀರಂತಬೈಲಿನಲ್ಲಿರುವ ಅಧ್ಯಾಪಕ ಭವನ ಪರಿಸರದಿಂದ ವರ್ಣರಂಜಿತ ಮೆರವಣಿಗೆ ಸಮ್ಮೇಳನ ನಗರಕ್ಕೆ ಆಗಮಿಸಿತು. ಅಪರಾಹ್ನ ಬಳಿಕ ವಿವಿಧ ವಿಷಯಗಳ ವಿಚಾರಗೋಷ್ಠಿ, ಬಳಿಕ ಅಧ್ಯಾಪಕರಿಂದ ವಿವಿಧ ಸಾಂಸ್ಕತಿಕ ಕಾರ್ಯಕ್ರಮಗಳು ಜರಗಿದವು.