ಪ್ರತಿ ಕ್ಷಣ ಸಾವನ್ನು ಎದುರು ನೋಡುತ್ತಾ ದೇಶ ಕಾಯುವ ಕೆಲಸದಲ್ಲಿ ಯೋಧರು ನಿರತರಾಗಿದ್ದರಿಂದಲೇ ಪ್ರಜೆಗಳು ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯ - ಅಶ್ವಿನಿ ಎಂ. ಎಲ್.
ಜೂನ್ 08, 2025
0
ಪ್ರತಿ ಕ್ಷಣ ಸಾವನ್ನು ಎದುರು ನೋಡುತ್ತಾ ದೇಶ ಕಾಯುವ ಕೆಲಸದಲ್ಲಿ ಯೋಧರು ನಿರತರಾಗಿದ್ದರಿಂದಲೇ ಪ್ರಜೆಗಳು ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯ - ಅಶ್ವಿನಿ ಎಂ. ಎಲ್.
ಮಂಜೇಶ್ವರ: ಪ್ರತಿ ಕ್ಷಣ ಸಾವನ್ನು ಎದುರು ನೋಡುತ್ತಾ ದೇಶ ಕಾಯುವ ಕೆಲಸದಲ್ಲಿ ಯೋಧರು ನಿರತರಾಗಿದ್ದರಿಂದಲೇ ಪ್ರಜೆಗಳು ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗಿದೆʼ ಎಂದು ಭಾರತೀಯ ಜನತಾ ಪಕ್ಷ ಕಾಸರಗೋಡು ಜಿಲ್ಲಾಧ್ಯಕ್ಷೆ ಶ್ರೀಮತಿ ಅಶ್ವಿನಿ ಎಂ.ಎಲ್ ನುಡಿದರು. ಅವರು ಇಂದು ಸಂಜೆ ಮಂಜೇಶ್ವರ ಮಾಣಿಂಜದಲ್ಲಿ ಭಾರತೀಯ ಜನತಾಪಕ್ಷ ಮಂಜೇಶ್ವರ ಮಂಡಲ ವತಿಯಿಂದ ಮಾಣಿಂಜದ ಮಣ್ಣಿನ ವೀರ ಯೋಧ "ಅಶೋಕ್ ಮಾಣಿಂಜ"ರವರಿಗೆ ಹಮ್ಮಿಕೊಂಡ "ಹುಟ್ಟೂರ ಸನ್ಮಾನ" ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಉದ್ಘಾಟಿಸಿ, ಯೋಧರನ್ನ ಗೌರವಾಧರಗಳಿಂದ ಸನ್ಮಾನಿಸಿ, ಮಾತನಾಡಿದರು. ʼಸ್ವಂತ ಊರು, ಮನೆ, ಕುಟುಂಬ ಎಲ್ಲವನ್ನೂ ಮರೆತು ದೇಶದ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಲು ಸಿದ್ಧರಾಗಿರುವ ಸೈನಿಕರು ನಮಗೆ ಮಾದರಿ.
ಮಾಣಿಂಜದ ಊರ ಗ್ರಾಮಸ್ಥರು ತಮ್ಮ ಊರಿನ ಯೋಧನಿಗೆ ಗೌರವಿಸಿದ ಪರಿ ನಿಜಕ್ಕೂ ಅವಿಸ್ಮರಣೀಯ. ಇದರಿಂದ ದೇಶ ಸೇವೆ ಮಾಡುವ ಯೋಧರಿಗೆ ಇನ್ನಷ್ಟು ಪ್ರೋತ್ಸಾಹ ಸಿಗುತ್ತದೆ. ಅದೇ ರೀತಿ ‘ದೇಶ ಕಾಯುವ ಸೈನಿಕ, ಅನ್ನ ಕೊಡುವ ರೈತ, ದೇಶದ ಭವಿಷ್ಯ ನಿರ್ಮಿಸುವ ಶಿಕ್ಷಕರಿಗೆ ಸಮಾಜದಿಂದ ಗೌರವ ಸಿಗಬೇಕು. ಅವರ ತ್ಯಾಗ ನಮ್ಮ ಯುವಕರಿಗೆ ಪ್ರೇರಣೆಯಾಗಬೇಕು. ಇಲ್ಲಿಂದು ವೀರಯೋಧನನ್ನು ಸನ್ಮಾನಿಸುವುದು ನಮ್ಮ ಸೌಭಾಗ್ಯ ಎಂದವರು ನುಡಿದರು. ಈ ವೇಳೆ ಭಾರತೀಯ ಜನತಾ ಪಕ್ಷ ಮಂಜೇಶ್ವರ ಪಂಚಾಯತ್ ಸಮಿತಿಯ ಬೂತ್ ನಂಬರ್ 12 ವತಿಯಿಂದ ಶಾಲಾ ಮಕ್ಕಳಿಗೆ ಪುಸ್ತಕ ಹಾಗೂ ಬ್ಯಾಗ್ ವಿತರಣಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ, ಮಂಜೇಶ್ವರ ಗ್ರಾಮ ಪಂಚಾಯತ್ ಸದಸ್ಯ ಯಾದವ ಬಡಾಜೆ, ಮಂಜೇಶ್ವರ ಗಾಂಧಿನಗರ ನೇತಾಜಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ: ಸುಕೇಶ್ ಆಳ್ವ, ಮಾಜಿ ಗೌರವ್ಯಾಧ್ಯಕ್ಷ: ಮೋಹನ್ ಬಾಬು, ಪಕ್ಷದ ಕಾರ್ಯಕರ್ತರಾದ ದಿನೇಶ್, ಸುರೇಶ್, ಕೌಶಿಕ್, ಅಭಿಷೇಕ, ತೇಜಸ್, ರಜತ್, ಶಿವಪ್ರಸಾದ್, ಕಿರಣ್, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಸದಸ್ಯ ಯಶ್ ಪಾಲ್ ಮಂಜೇಶ್ವರ ಸ್ವಾಗತಿಸಿ, ಯಶ್ ರಾಜ್ ಮಂಜೇಶ್ವರ ವಂದಿಸಿದರು.