Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580. Qries Qries Qries Qries Qries

ಕಾರ್ಕಳ -ಮೂಡುಬಿದಿರೆಯಲ್ಲಿ ಆನೆಗುಂದಿ ಶ್ರೀಗಳ ಚಾತುರ್ಮಾಸ್ಯ ಸಂಕಲ್ಪ ಯಾತ್ರೆ.

ಕಾರ್ಕಳ -ಮೂಡುಬಿದಿರೆಯಲ್ಲಿ ಆನೆಗುಂದಿ ಶ್ರೀಗಳ ಚಾತುರ್ಮಾಸ್ಯ ಸಂಕಲ್ಪ ಯಾತ್ರೆ.
ಕಾರ್ಕಳ: ಲೌಕಿಕ ಶಿಕ್ಷಣದ ಜೊತೆ ಆಧ್ಯಾತ್ಮಿಕ ಶಿಕ್ಷಣವು ಅತೀ ಅಗತ್ಯ, ಮಹಾ ಸಂಸ್ಥಾನದ ವೇದಪಾಠ ಶಾಲೆಯನ್ನು ಎಲ್ಲ ಪ್ರದೇಶಗಳ ಸಜ್ಜನ ಬಂಧುಗಳು ಸದುಪಯೋಗಗೊಳಿಸಬೇಕು. ಸ್ಥಳೀಯರು ವೇದಾಧ್ಯಯನ ಮಾಡಿದಲ್ಲಿ ಇಲ್ಲಿನ ಪ್ರದೇಶಗಳಲ್ಲಿ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಸ್ಥಳೀಯ ಪ್ರದೇಶಗಳಲ್ಲಿ ಸಂಸ್ಕಾರ ಸಂಸ್ಕೃತಿಯ ಜಾಗೃತಿಗೆ ಕಾರಣವಾಗುತ್ತದೆ ಎಂದು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತ ಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾ ಸ್ವಾಮಿಗಳವರು ನುಡಿದರು. ಅವರು ಆನೆಗುಂದಿ ಶ್ರೀಗಳವರು ಚಾತುರ್ಮಾಸ್ಯ ವ್ರತ ಸಂಕಲ್ಪದ ಪೂರ್ವಭಾವಿಯಾಗಿ ವಿವಿಧ ಕ್ಷೇತ್ರಗಳ ಸಂದರ್ಶನಗೈದು ದೇವರ ಅನುಗ್ರಹ ಸಿದ್ಧಿಸುವ ವಾಡಿಕೆಯಂತೆ ಮೂರನೇ ಹಂತವಾಗಿ
ಇಂದು ಕಾರ್ಕಳ ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಆಶೀರ್ವಚನ ನೀಡುತ್ತಿದ್ದರು. ಈ ಬಾರಿಯ ಚಾತುರ್ಮಾಸ್ಯದ ವೇಳೆ ವಿಶೇಷವಾಗಿ ರಾಶಿ ಪೂಜೆ ಮಾಡುವ ಸಂಕಲ್ಪ ಹೊಂದಿದ್ದೇವೆ. ಯುವ ಜನತೆಗೆ ಮಹತ್ವಪೂರ್ಣ ವಿಚಾರ ಸಂಕಿರಣವನ್ನು ನಡೆಸುವ ಯೋಜನೆಯೂ ಇದೆ ಎಲ್ಲರೂ ಭಾಗಿಯಾಗಬೇಕು ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗಿಯಾಗಿ ಸಮಾಜ ಬಾಂಧವರು ಸದುಪಯೋಗ ಪಡೆಯಬೇಕು ಎಂದು ಅವರು ಕರೆ ನೀಡಿದರು. ಕ್ಷೇತ್ರದ ಧರ್ಮದರ್ಶಿ ಶಿಲ್ಪಿ ರಾಮಚಂದ್ರ ಆಚಾರ್ಯ ಕಾರ್ಕಳ, ಮೊಕ್ತೇಸರರಾದ ರವಿ ಆಚಾರ್ಯ ಕಾರ್ಕಳ,ಸುರೇಶ್ ಆಚಾರ್ಯ ನಿಟ್ಟೆ, ಮಾಜಿ ಆಡಳಿತ ಮೊಕ್ತೇಸರರಾದ ರತ್ನಾಕರ ಆಚಾರ್ಯ ಕಾರ್ಕಳ,ಸುಧಾಕರ ಆಚಾರ್ಯ ಕಾರ್ಕಳ,ದಾನಶಾಲೆ ಸತೀಶ್ ಆಚಾರ್ಯ ಕಾರ್ಕಳ, ಸಲಹಾ ಸಮಿತಿ, ಭಜನಾ ಸಮಿತಿ, ಮಹಿಳಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ನಂತರ
ಮೂಡುಬಿದಿರೆ ಜಗದ್ಗುರು ಶ್ರೀ ಶ್ರೀ ಶ್ರೀ ಅಯ್ಯ ಸ್ವಾಮಿ ಮಠಕ್ಕೆ ಆಗಮಿಸಿದ ಆನೆಗುಂದಿ ಶ್ರೀಗಳವರನ್ನು ಶ್ರೀಮಠದ ಬ್ರಹ್ಮಶ್ರೀ ವಿಶ್ವನಾಥ ಪುರೋಹಿತ್,ಪ್ರಸಾದ್ ಆಚಾರ್ಯ ಮಂಗಳೂರು, ಯೋಗೀಶ್ ಪುರೋಹಿತ್ ಸೇರಿದಂತೆ ವಿವಿಧ ಸಮಿತಿ ಸದಸ್ಯರು ಸ್ವಾಗತಿಸಿ ಫಲನ್ಯಾಸ ಮಾಡಿ ಅನುಗ್ರಹ ಮಂತ್ರಾಕ್ಷತೆ ಪಡೆದರು.
ಮೂಡುಬಿದಿರೆ ಗುರುಮಠ ಶ್ರೀ ಕಾಳಿಕಾಂಬಾ ದೇವಸ್ಥಾನಕ್ಕೆ ಆಗಮಿಸಿದ ಆನೆಗುಂದಿ ಶ್ರೀಗಳವರನ್ನು ಪ್ರಧಾನ ಅರ್ಚಕ ವಿಘ್ನೇಶ್ ಪುರೋಹಿತ್ ಪೂರ್ಣ ಕುಂಭದೊಂದಿಗೆ ಸ್ವಾಗತಿಸಿದರು. ದೇವಸ್ಥಾನದ ಧರ್ಮದರ್ಶಿ ಬಾಲಕೃಷ್ಣ ಆಚಾರ್ಯ ಉಳಿಯ, ಮೊಕ್ತೇಸರರಾದ ಶಿವರಾಮ ಆಚಾರ್ಯ ಉಳಿಯ,ಯೋಗೀಶ್ ಆಚಾರ್ಯ ಮೂಡುಬಿದಿರೆ, ಮಾಜಿ ಆಡಳಿತ ಮೊಕ್ತೇಸರ ಜಯಕರ ಪುರೋಹಿತ್, ಹಾಗೂ ಆಡಳಿತ ಸಮಿತಿ,ಸೇವಾ ಸಮಿತಿ, ಮಹಿಳಾ ಸಮಿತಿ ಸೇರಿದಂತೆ ವಿವಿಧ ಸಮಿತಿ ಸದಸ್ಯರು ಕ್ಷೇತ್ರದ ವತಿಯಿಂದ ಗೌರವಾರ್ಪಣೆ ಕಾಣಿಕೆ ಕಾಣಿಕೆ ಸಲ್ಲಿಸಿ ಅನುಗ್ರಹ ಮಂತ್ರಾಕ್ಷತೆ ಪಡೆದರು. ಚಾತುರ್ಮಾಸ್ಯ ವ್ರತ ಸಂಕಲ್ಪ ಯಾತ್ರೆಯಲ್ಲಿ ಶ್ರೀಗಳವರೊಂದಿಗೆ ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಪ್ರತಿನಿಧಿಗಳಾಗಿ ಶ್ರೀ ಕಾಡಬೆಟ್ಟು ನಾಗರಾಜ ಆಚಾರ್ಯ ಉಡುಪಿ, ಶ್ರೀ ಅರವಿಂದ ವೈ ಆಚಾರ್ಯ ಬೆಳುವಾಯಿ,ಕನ್ಯಾನ ಜನಾರ್ಧನ ಆಚಾರ್ಯ,ಶ್ರೀಮತಿ ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ಕೆ ಹರೀಶ್ ಆಚಾರ್ಯ ಕಾರ್ಕಳ, ದಯಾನಂದ ಆಚಾರ್ಯ ಕೆಳಾರ್ಕಳಬೆಟ್ಟು,ಗಣೇಶ್ ಆಚಾರ್ಯ ಕೆಮ್ಮಣ್ಣು,ಲೋಲಾಕ್ಷ ಶರ್ಮಾ ಪಡುಕುತ್ಯಾರು, ಕೇಶವ ಶರ್ಮಾ ಪಡುಕುತ್ಯಾರು, ರಮಾ ನವೀನ್ ಆಚಾರ್ಯ ಕಾರ್ಕಳ, ದೀಪಾ ಸುರೇಶ್ ಆಚಾರ್ಯ ಉಡುಪಿ, ಯೋಗೀಶ್ ಆಚಾರ್ಯ ಕರಂಬಳ್ಳಿ, ಕವಿತಾ ಹರೀಶ್ ಆಚಾರ್ಯ ಕಾರ್ಕಳ,ಜ್ಯೋತಿ ರಾಘವೇಂದ್ರಆಚಾರ್ಯ ಉಡುಪಿ ಮುಂತಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Namma Manjeswara Official Whatsapp Group 2

Qries

Advertisement

Qries Qries Qries Qries Qries Qries Qries

News

Advt

Advertisement

Qries Qries Qries