ಸೇವಾಭಾರತಿ (ರಿ.) ಜೋಡುಕಲ್ಲು ವತಿಯಿಂದ ವಿಶ್ವಯೋಗ ದಿನಾಚರಣೆ ಕಾರ್ಯಕ್ರಮ.
ಜೂನ್ 21, 2025
0
ಸೇವಾಭಾರತಿ (ರಿ.) ಜೋಡುಕಲ್ಲು ವತಿಯಿಂದ ವಿಶ್ವಯೋಗ ದಿನಾಚರಣೆ ಕಾರ್ಯಕ್ರಮ.
ಉಪ್ಪಳ: ಸೇವಾಭಾರತಿ (ರಿ.) ಜೋಡುಕಲ್ಲು ಇದರ ವತಿಯಿಂದ ವಿಶ್ವಯೋಗ ದಿನಾಚರಣೆ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ 40 ಸದಸ್ಯರು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕ ಸುನಿಲ್ ವೈಶಾಖ್ ಯೋಗಾಬ್ಯಾಸ ಮಾಡಿಸಿದರು. ಸೇವಾ ಭಾರತಿಯ ಕಾರ್ಯದರ್ಶಿ ಹರೀಶ್ ಪಟ್ಲ ಸ್ವಾಗತಿಸಿದರು. ಹರಿಪ್ರಸಾದ್ ಶೆಟ್ಟಿ ಯೋಗದ ಮಾಹಿತಿ, ಮಾಧವ ಆಚಾರ್ಯ ಬೇಕೂರು ಧ್ಯಾನ ಹಾಗೂ ವಾಮನ ಬೇಕೂರು ರೇಕಿಯ ಬಗ್ಗೆ ಮಾಹಿತಿ ನೀಡಿದರು. ಸೇವಭಾರತಿಯ ಕಾರ್ಯದರ್ಶಿ ಲೋಕೇಶ್ ನೋಂಡಾ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಹಿರಿಯರಾದ ಕುಂಞಣ್ಣ ರೈ, ರಘುನಾಥ್ ಜೋಡುಕಲ್ಲು, ಸದಾಶಿವ ಕುಲಾಲ್ ಕಯ್ಯಾರು, ಭಾರತೀಯ ಸೇನೆಯ ಹೆಮ್ಮೆಯ ಯೋಧ ಪರೇಶ್ ರೈ ಹಾಗೂ ಸ್ಥಳೀಯರು ಭಾಗವಹಿಸಿದರು. ಸೇವಾ ಭಾರತೀಯ ಕಾರ್ಯದರ್ಶಿ ಶಿವಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.