Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580. Qries Qries Qries Qries Qries

ಆನೆಗುಂದಿಶ್ರೀಗಳವರ ಚಾತುರ್ಮಾಸ್ಯ ವ್ರತ ಸಂಕಲ್ಪ ಯಾತ್ರೆ ಆರಂಭ.

ಆನೆಗುಂದಿಶ್ರೀಗಳವರ ಚಾತುರ್ಮಾಸ್ಯ ವ್ರತ ಸಂಕಲ್ಪ ಯಾತ್ರೆ ಆರಂಭ.
ಪಡುಕುತ್ಯಾರು: ಕಟಪಾಡಿ ಪಡುಕುತ್ಯಾರಿನ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳವರ ವಿಶ್ವಾವಸು ಸಂವತ್ಸರದ 21 ನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆಯು 2025 ಜುಲೈ 10 ರಿಂದ ಸೆಪ್ಟೆಂಬರ್ 7ರ ತನಕ ನಡೆಯಲಿದೆ. ಆನೆಗುಂದಿಶ್ರೀಗಳವರು ತಮ್ಮ ಚಾತುರ್ಮಾಸ್ಯ ವ್ರತದ ಪೂರ್ವಭಾವಿಯಾಗಿ ಎಲ್ಲಾ ಕ್ಷೇತ್ರಗಳನ್ನು ಸಂದರ್ಶಿಸಿ ದೇವರ ಅನುಗ್ರಹ ಪ್ರಾಪ್ತಿಗಾಗಿ ಇರುವ ಚಾತುರ್ಮಾಸ್ಯ ವ್ರತಸಂಕಲ್ಪ ಯಾತ್ರೆಯ ಕೊಪ್ಪಳ ಜಿಲ್ಲೆಯ ಗಂಗಾವತಿಯ ಆನೆಗುಂದಿಯಲ್ಲಿನ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಪಂಚಸಿಂಹಾಸನ ಸರಸ್ವತೀ ಪೀಠ ದಿಂದ ಆರಂಭಗೊಂಡಿತು.
ಆನೆಗುಂದಿಯಲ್ಲಿ ನಡೆದ ಸಮಾರಂಭದಲ್ಲಿ ಪಂಚಸಿಂಹಾಸನ ಸರಸ್ವತೀ ಪೀಠ ವಿಕಾಸ ಸಮಿತಿ ಅಧ್ಯಕ್ಷ ಶ್ರೀ ದಿನೇಶ್‌ ಆಚಾರ್ಯ ಪಡುಬಿದ್ರಿ, ಕೊಶಾಧಿಕಾರಿ ವೇ.ಬ್ರ ಶ್ರೀ ಸುಬ್ಬಣ್ಣಾಚಾರ್ಯ ಗಿಣಿಗೇರಿ, ಉಪಾಧ್ಯಕ್ಷ ಶ್ರೀ ಎಸ್‌ ವಿ ವೇಣುಗೋಪಾಲ ಆಚಾರ್‌ ಬೆಂಗಳೂರು, ಪ್ರಧಾನ ಕಾರ್ಯದರ್ಶಿ ಶ್ರೀ ಜೆ ಮಂಜುನಾಥ ಅಂಬಣ್ಣ, ಕಾರ್ಯದರ್ಶಿ ಶ್ರೀ ಮಂಜುನಾಥ ವಾಸಪ್ಪ ಬನ್ನಿಕೊಪ್ಪ,ಸೇವಾ ಸಮಿತಿ ಅಧ್ಯಕ್ಷ ಶ್ರೀ ಉಮೇಶ್‌ ಕಾಳಪ್ಪ ಪತ್ತಾರ್‌ ಕೊಪ್ಪಳ, ಕಾರ್ಯದರ್ಶಿ ಶ್ರೀ ಶಿವಕುಮಾರ ಕಮ್ಮಾರ, ಮಹಿಳಾ ಮಂಡಳಿ ಗೌರವಾಧ್ಯಕ್ಷೆ ಶ್ರೀಮತಿ ವರ್ಣಾ ಎಸ್‌ ಆಚಾರ್ಯ ಗಿಣಿಗೇರಿ ಮಹಿಳಾ ಮಂಡಳಿ ಅಧ್ಯಕ್ಷೆ ಭಾಗ್ಯಶ್ರೀ ಚಿನ್ನಾಳ, ಉಪಾಧ್ಯಕ್ಷೆ ಶಾರದಮ್ಮ ಡಿ ಬಡಿಗೇರ, ಕೋಶಾಧಿಕಾರಿ ಸ್ಮಿತಾ ಮಂಜುನಾಥ ಗಂಗಾವತಿ,ಶ್ರೀ ಕೃಷ್ಣ ಆಚಾರ್ಯ ಬಳ್ಳಾರಿ, ಶ್ರೀ ರಾಮ ಆಚಾರ್ಯ ಬಳ್ಳಾರಿ, ಶ್ರೀ ಸಿದ್ದೇಶ ಪುರೋಹಿತ್‌, ಶ್ರೀ ಎಂ ಕೆ ರವೀಂದ್ರ ಬಳ್ಳಾರಿ, ಶ್ರೀ ಶ್ರೀನಾಥ್‌ ಬಳ್ಳಾರಿ, ಶ್ರೀ ಮೌನೇಶ್‌ ಪತ್ತಾರ್‌ ಸಿದ್ದಾಪುರ, ಮುಂತಾದವರು ಉಪಸ್ಥಿತರಿದ್ದರು. ಚಾತುರ್ಮಾಸ್ಯ ವ್ರತನಿರ್ವಹಣಾ ಸಮಿತಿ ಪ್ರತಿನಿಧಿಗಳಾದ ಶ್ರೀ ಲೋಲಾಕ್ಷ ಶರ್ಮಾ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಕೇಶವ ಶರ್ಮಾ, ಶ್ರೀ ಮೌನೇಶ್‌ ಶರ್ಮಾ ಪಡುಕುತ್ಯಾರು ಉಪಸ್ಥಿತರಿದ್ದರು. ಕೊಲಕಾಡಿ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ಜಗದ್ಗುರುಗಳವರನ್ನು ದೇವಸ್ಥಾನದ ಆಡಳಿತ ಮೊಕ್ತೇಸರ್‌ ಶ್ರೀ ಸುಧಾಕರ ಆಚಾರ್ಯ ಸ್ವಾಗತಿಸಿದರು. ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಶ್ರೀ ಸುಬ್ರಾಯ ಆಚಾರ್ಯ ಕೊಲಕಾಡಿ, ಕಾರ್ಯಾಧ್ಯಕ್ಷ ಸುಧೀರ್‌ ಎಸ್‌ ಆಚಾರ್ಯ , ಮೊಕ್ತೇಸರರಾದ ಜಗದೀಶ್‌ ಆಚಾರ್ಯ ಮಾನಂಪಾಡಿ, ಶ್ರೀ ಜಗದೀಶ್‌ ಆಚಾರ್ಯ ಪಂಜಿನಡ್ಕ, ಕೂಡುವಳಿಕೆ ಮೊಕ್ತೇಸರ ಶ್ರೀ ಸದಾಶಿವ ಆಚಾರ್ಯ ಕೀಲ್ಪಾಡಿ, ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಶ್ರೀ ಮಧು ಆಚಾರ್ಯ ಮೂಲ್ಕಿ, ಮಹಿಳಾ ಬಳಗ ಅಧ್ಯಕ್ಷ ಶ್ರೀಮತಿ ಪ್ರೇಮಾ ಸುಧಾಕರ ಆಚಾರ್ಯ, ಶ್ರೀಮತಿ ಲಲಿತಾ ರವೀಂದ್ರ ಆಚಾರ್ಯ ಮುಂತಾದವರು ಉಪಸ್ಥಿರಿದ್ದರು. ಪಡುಪಣಂಬೂರು ನಾಲ್ಕೂರು ಪಂಜುರ್ಲಿ ದೈವಸ್ಥಾನದಲ್ಲಿ ಜಗದ್ಗುರುಗಳವರನ್ನು ದೈವಸ್ಥಾನದ ಅಧ್ಯಕ್ಷ ಶ್ರೀ ಪಿ.ಜಗದೀಶ್‌ ಆಚಾರ್ಯ ಪಡುಪಣಂಬೂರು ಸ್ವಾಗತಿಸಿದರು. ಅಸೆಟ್‌ ಅಧ್ಯಕ್ಷ ಬಿ. ಸೂರ್ಯಕುಮಾರ್‌ ಹಳೆಯಂಗಡಿ, ಬಿ.ಜಗದೀಶ ಆಚಾರ್ಯ, ಎಚ್ ಭುಜಂಗ ಆಚಾರ್ಯ, ವೈ ಅನಂತಯ್ಯ ಆಚಾರ್ಯ, ಮಾತೃ ಸಮಿತಿ ಅಧ್ಯಕ್ಷೆ ಶ್ರೀಮತಿ ಸತ್ಯಾ ವಾಸುದೇವ ಆಚಾರ್ಯ, ಕೋಶಾಧಿಕಾರಿ ರೇಣುಕಾ ಜಗದೀಶ್‌ ಆಚಾರ್ಯ ಅರ್ಚಕರಾದ ಸದಾಶಿವ ಆಚಾರ್ಯ, ಟಿ. ಜಿ ನಾಗೇಶ ಆಚಾರ್ಯ, ಸುಧೀಂದ್ರ ಆಚಾರ್ಯ ಪಡುಪಣಂಬೂರು ಮುಂತಾದವರು ಉಪಸ್ಥಿರಿದ್ದರು. ಹಳೆಯಂಗಡಿ ಶ್ರೀ ದುರ್ಗಾ ಪರಮೇಶ್ವರಿ ವಿನಾಯಕ ಮಠಕ್ಕೆ ಆಗಮಿಸಿದ ಜಗದ್ಗುರುಗಳವರನ್ನು ಮಠದ ಅಧ್ಯಕ್ಷ ಬಿ. ಸೂರ್ಯಕುಮಾರ್‌ ಹಳೆಯಂಗಡಿ ಸ್ವಾಗತಿಸಿದರು. ಬಿ.‌ ದಿವಾಕರ ಆಚಾರ್ಯ ಬೊಳ್ಳೂರು, ಅಸೆಟ್‌ ಕೋಶಾಧಿಕಾರಿ ಪೃಥ್ವಿ ರಾಜ್‌ ಕಿನ್ನಿಗೋಳಿ, ಜಗದೀಶ್‌ ಆಚಾರ್ಯ ಕಿನ್ನಿಗೋಳಿ, ಬಿ.ಗಜೇಂದ್ರ ಕುಮಾರ್‌, ಬಿ ಕೃಷ್ಣ ಕುಮಾರ್‌, ಬಿ. ಜೀವನ್‌ ಕುಮಾರ್‌, ಬಿ ಸಾಗರ್‌ ಕುಮಾರ್, ಬಿ ಅರುಣ್‌ ಕುಮಾರ್‌, ಶ್ರೀಮತಿ ರಾಜೇಶ್ವರೀ ಸೂರ್ಯಕುಮಾರ್ ಉಪಸ್ಥಿತರಿದ್ದರು. ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನಕ್ಕೆ ಜಗದ್ಗುರುಗಳವರು ಭೇಟಿ ನೀಡಿದ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಆಡಳಿತಾಧಿಕಾರಿ ಕೆ. ಉಮೇಶ್ ಆಚಾರ್ಯ ಪಾಂಡೇಶ್ವರ ಅವರು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಆಡಳಿತ ಮೊಕ್ತೇಸರ ಕೆ. ಕೇಶವ ಆಚಾರ್ಯ ಮಂಗಳೂರು, ಮಾಜಿ ಮೂರನೇ ಮೊಕ್ತೇಸರ ಎ. ಲೋಕೇಶ್ ಆಚಾರ್ಯ ಚಿಲಿಂಬಿ, ಪಿ ರವೀಂದ್ರ ಮಂಗಳಾದೇವಿ, ಗುರುಸೇವಾ ಪರಿಷತ್ತು ಕೇಂದ್ರಸಮಿತಿ ಅಧ್ಯಕ್ಷ ಶ್ರೀ ಗಣೇಶ್‌ ಆಚಾರ್ಯ ಕೆಮ್ಮಣ್ಣು, ಗುರುಸೇವಾ ಪರಿಷತ್ತು ಮಂಗಳೂರು ಅಧ್ಯಕ್ಷ ಶ್ರೀ ಶೇಖರ ಆಚಾರ್ಯ ಮಂಗಳೂರು, ಶ್ರೀ ಸತೀಶ್‌ ಆಚಾರ್ಯ ಸುರುಳಿ, ಶ್ರೀ ರತ್ನಾಕರ ಆಚಾರ್ಯ ಉಜ್ಜೋಡಿ, ಶ್ರೀ ಕಾಳಿಕಾಂಬಾ ಸೇವಾ ಸಮಿತಿಯ ವಿವೇಕ್‌ ಜಾರ್ಕಳ, ವಿಶ್ವಬ್ರಾಹ್ಮಣ ಮಹಿಳಾ ಸಮಿತಿಯ ಅರುಣಾ ಸುರೇಶ್‌ ಆಚಾರ್ಯ, ವಿದ್ಯಾ ರವೀಂದ್ರ ಆಚಾರ್ಯ, ವಿಶ್ವಕರ್ಮ ಬಂಧುಗಳ ಮುಖಂಡ ಎಂ ಹೇಮಂತ ಆಚಾರ್ಯ ಎಕ್ಕೂರು, ಎಸ್ ಕೆ ಜಿ ಐ ನಿರ್ದೇಶಕ ಶ್ರೀಕಾಂತ ಆಚಾರ್ಯ, ಶ್ರೀ ಕುಂಟಾಡಿ ಪ್ರಕಾಶ್‌ ಆಚಾರ್ಯ, ವಿಶ್ವಕರ್ಮ ಕಲಾ ಪರಿಷತ್ ನ ಶ್ರೀ ಎ.ಜಿ ಸದಾಶಿವ ಆಚಾರ್ಯ, ಶ್ರೀ ಸುಧಾಮ ಆಚಾರ್ಯ, ಶ್ರೀ ಉಮೇಶ್‌ ತೀರ್ಥಹಳ್ಳಿ, ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಶ್ರೀ ಕೆ. ಎಲ್‌ ಹರೀಶ್‌, ಶ್ರೀ ಕೆ. ಎಲ್‌ ಸುರೇಶ್‌, ಗುರು ಸೇವಾ ಪರಿಷತ್ ಮಂಗಳೂರು ಘಟಕದ ಸದಸ್ಯರು ಉಪಸ್ಥಿತರಿದ್ದರು. ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಪ್ರತಿನಿಧಿಗಳಾಗಿ ಶ್ರೀ ಸರಸ್ವತೀ ಗೋವು ಪರ್ಯಾವರಣ್ ಸಂರಕ್ಷಣಾ ಟ್ರಸ್ಟ್ ಅಧ್ಯಕ್ಷ ಶ್ರೀ ಬೆಳುವಾಯಿ ಸುಂದರ ಆಚಾರ್ಯ ಮಂಗಳೂರು ಅಧ್ಯಕ್ಷರು , ಆನೆಗುಂದಿ ಪ್ರತಿಷ್ಠಾನ / ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಕೋಶಾಧಿಕಾರಿ ಶ್ರೀ ಅರವಿಂದ ವೈ ಆಚಾರ್ಯ ಬೆಳುವಾಯಿ ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿಯ ಪ್ರಮುಖರಾದ ಕೆ.ಎಂ.ಮಧುಸೂದನ ಆಚಾರ್ಯ, ದಿನೇಶ್ ಆಚಾರ್ಯ ಕಿನ್ನಿಗೋಳಿ, ಸುಂದರ ಆಚಾರ್ಯ ಮರೋಳಿ, ಶ್ರೀ ಲೋಲಾಕ್ಷ ಶರ್ಮಾ ಪಡುಕುತ್ಯಾರು, ಶ್ರೀ ಕೇಶವ ಶರ್ಮಾ ಪಡುಕುತ್ಯಾರು ಅವರು ಯಾತ್ರೆಯ ವೇಳೆ ಜಗದ್ಗುರುಗಳವರನ್ನು ಅನುಗಮಿಸಿ ಚಾತುರ್ಮಾಸ್ಯ ವ್ರತ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಸಂಬಂಧಪಟ್ಟ ದೇವಸ್ಥಾನದ ಮುಖ್ಯಸ್ಥರಿಗೆ ಹಸ್ತಾಂತರಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Namma Manjeswara Official Whatsapp Group 2

Qries

Advertisement

Qries Qries Qries Qries Qries Qries Qries

News

Advt

Advertisement

Qries Qries Qries