ರಾಷ್ಟ್ರೀಯ ಹೆದ್ದಾರಿಗೆ ನಯ ಪೈಸೆ ನೀಡದ ಪಿನರಾಯಿ ವಿಜಯನ್, ಹೆದ್ದಾರಿ ಕಾಮಗಾರಿ ಪರಿಶೀಲನೆ ಅಲ್ಪತನದ ಪರಮಾವಾದಿ - ಪ್ರಫುಲ್ಲ್ ಕೃಷ್ಣ.
ನವೆಂಬರ್ 21, 2023
0
ರಾಷ್ಟ್ರೀಯ ಹೆದ್ದಾರಿಗೆ ನಯ ಪೈಸೆ ನೀಡದ ಪಿನರಾಯಿ ಹೆದ್ದಾರಿ ಕಾಮಗಾರಿ ಪರಿಶೀಲನೆ ಅಲ್ಪತನದ ಪರಮವಾದಿ - ಪ್ರಫುಲ್ಲ್ ಕೃಷ್ಣ.
ವರ್ಕಾಡಿ: ಪಿನರಾಯಿಯ ನವ ಕೇರಳ ಯಾತ್ರೆ ಪಿನರಾಯಿಯ ಕೊನೆಯ ಯಾತ್ರೆ, ಅಲ್ಪತನ ಮತ್ತು ಜಂಬ ದೇಶದ ಕೊನೆಯ ಕಮ್ಯುನಿಸ್ಟ್ ಆಡಳಿತಕ್ಕೆ ನಾಂದಿ ಆಗಲಿದೆ ಎಂದು ಯುವಮೋರ್ಚಾ ರಾಜ್ಯ ಅಧ್ಯಕ್ಷ ಪ್ರಪುಲ್ ಕೃಷ್ಣ ಹೇಳಿದರು.
ಮಜೀರ್ಪಲ್ಲ ಪೇಟೆಯಲ್ಲಿ ವರ್ಕಾಡಿ ಬಿಜೆಪಿ ಪಂಚಾಯತ್ ಸಮಿತಿ ಸಂಘಟಿಸಿದ್ದ 'ಜನ ಪಂಚಾಯತ್ ಸಾರ್ವಜನಿಕ ಸಭೆ' ಉದ್ಘಾಟಿಸಿ ಅವರು ಮಾತನಾಡಿದರು. ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ನಯಾ ಪೈಸೆ ನೀಡದ ಕೇರಳ ರಾಜ್ಯದ ಮುಖ್ಯಮಂತ್ರಿ ಹೆದ್ದಾರಿ ಕಾಮಗಾರಿ ಪರಿಶೀಲನೆ ಮಾಡಲು 1.5 ಕೋಟಿಯ ಬಸ್ಸಲ್ಲಿ ಬಂದು ನಾಟಕ ಮಾಡುವ ಬದಲು ಕೇಂದ್ರ ಸರಕಾರಕ್ಕೆ ಅಭಿನಂದನೆ ಸಲ್ಲಿಸಲ್ಲಿ ಎಂದು ಅಗ್ರಹಿಸಿದರು. ಮಂಜೇಶ್ವರ ಶಾಸಕರು "ಮಂಜೇಶ್ವರಕ್ಕೆ ಶಾಪ" ಅವರು ಇಲ್ಲಿಯ ಶಾಸಕ ಅಲ್ಲ ದುಬೈಯಿಯ ಶಾಸಕ ತಿಂಗಳಲ್ಲಿ 15 ದಿನ ವಿದೇಶದಲ್ಲಿ ಅವರಿಗೆ ಏನು ಕೆಲಸ ಎಂದು ಅವರು ಪ್ರಶ್ನಿಸಿದರು. ಬಿಜೆಪಿ ನೇತಾರ ಧೂಮಪ್ಪ ಶೆಟ್ಟಿ ತಾಮಾರ್ ಅಧ್ಯಕ್ಷತೆ ವಹಿಸಿದ್ದರು.
ಬಿಜೆಪಿ ಮಂಡಲ ಅಧ್ಯಕ್ಷ
ಆದರ್ಶ ಬಿ.ಎಂ ಕೇಂದ್ರ ಸರಕಾರದ ಯೋಜನೆಗಳ ಸಮಗ್ರ ಮಾಹಿತಿ ನೀಡಿದರು. ಮಹಿಳಾ ಮೋರ್ಚಾ ರಾಷ್ಟ್ರೀಯ ಸಮಿತಿ ಸದಸ್ಯೆ ಶ್ರೀಮತಿ ಅಶ್ವಿನಿ ಎಂ.ಎಲ್, ನೇತಾರರಾದ ಹರಿಶ್ಚಂದ್ರ ಎಂ, ಮಣಿಕಂಠ ರೈ ಪ್ರಾಸ್ತಾವಿಕ ಮಾತನಾಡಿದರು. ಮುಖಂಡರಾದ ವಿಜಯ್ ರೈ ಪರಂಕಿಲ, ತುಳಸಿ ಕುಮಾರಿ, ರವಿ ಮುಡಿಮಾರ್, ಕೃಷ್ಣ ಮಡಿಕಾ, ಯತೀರಾಜ್ ಶೆಟ್ಟಿ, A.K ಕೈ ಕಯ್ಯರ್, ಸಂಪತ್, ಸುಬ್ರಮಣ್ಯ ಭಟ್, ಸಂತೋಷ ದೈಗೋಳಿ, ಕೆ.ವಿ ಭಟ್, ಚಂದ್ರಹಾಸ ಕಡಂಬಾರ್, ಹಾಗೂ ಜನ ಪ್ರತಿನಿಧಿಗಳು ಉಪಸ್ಥಿತರಿದ್ದರು. ಭಾಸ್ಕರ ಪೊಯ್ಯೇ ಸ್ವಾಗತಿಸಿ, ರಕ್ಷನ್ ಅಡೆಕಳಕಟ್ಟೆ ವಂದಿಸಿದರು.