ವರ್ಕಾಡಿ ಬಾವಲಿಗುಳಿಯಲ್ಲಿ ಈ ಬಾರಿ ಅದ್ದೂರಿಯ "ದಶಮಾನೋತ್ಸವದ ಸಾರ್ವಜನಿಕ ಶ್ರೀ ಗಣೇಶೋತ್ಸವ"ಕ್ಕೆ ಸಿದ್ಧತೆ.
ಜೂನ್ 25, 2024
0
ವರ್ಕಾಡಿ ಬಾವಲಿಗುಳಿಯಲ್ಲಿ ಈ ಬಾರಿ ಅದ್ದೂರಿಯ "ದಶಮಾನೋತ್ಸವದ ಸಾರ್ವಜನಿಕ ಶ್ರೀ ಗಣೇಶೋತ್ಸವ"ಕ್ಕೆ ಸಿದ್ಧತೆ.
ವರ್ಕಾಡಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬಾವಲಿಗುಳಿ, ವರ್ಕಾಡಿ ಮಂಜೇಶ್ವರ ಇದರ ಆಶ್ರಯದಲ್ಲಿ ಗಣೇಶೋತ್ಸವದ ದಶಮಾನೋತ್ಸವ ತಾರೀಕು,೦7/ ೦9/24ನೇ ಶನಿವಾರ ಬಹಳ ವಿಜ್ರಂಭಣೆಯಿಂದ ಆಚರಿಸಲಿದ್ದೇವೆ. ಪ್ರಯುಕ್ತ ಸಮಿತಿಯ ಮಹಾಸಭೆಯನ್ನು ಕರೆಯಲಾಗಿತ್ತು .ಈ ಸಭೆಯಲ್ಲಿ ಸಭಾಧ್ಯಕ್ಷರಾಗಿ ಸಮಿತಿಯ ಗೌರಾಧ್ಯಕ್ಷರಾದ ಲಕ್ಷ್ಮೀನಾರಾಯಣ ಹೊಳ್ಳ ಮರಿಕಾಪು ಮಾತನಾಡಿ ಈ ವರ್ಷದ ಗಣೇಶೋತ್ಸವ ಬಹಳ ಅದ್ದೂರಿಯಾಗಿ ನಾಡಿನ ಜನತೆಯ ಮನ ಗೆಲ್ಲಬೇಕು. ಸರ್ವೇ ಜನ ಸುಖಿನೋ ಭವಂತು ಎಂಬಂತೆ ಎಲ್ಲಾ ಧರ್ಮ ದವರಿಗೂ ಸುಖ ಶಾಂತಿ ಸಿಗಬೇಕು .ಈ ನಿಟ್ಟಿನಲ್ಲಿ ಯುವಕರ ಶ್ರಮ ಅವಶ್ಯ ಕವೆಂದರು. ಸಭೆಯಲ್ಲಿ ಸಮಿತಿ ಅಧ್ಯಕ್ಷರಾದ ವಿಶ್ವನಾಥ ರೈ ಅಡ್ಕ, ಸಂತೋಷ ತಂತ್ರಿ ವರ್ಕಾಡಿ, ಸಮಿತಿಯ ಪ್ರಧಾನ ಸಂಚಾಲಕರಾದ ಹರೀಶ್ ಕನ್ನಿಗುಳಿ, ಗೌರವ ಸಲಹೆಗಾರರಾದ ಶಂಕರನಾರಾಯಣ ಹೊಳ್ಳ ಮರಿಕಾಪು, ಜಿತೇಶ್ ಪೂಂಜಾರಮನೆ, ಸುಧಾಕರ ಶೆಟ್ಟಿ ಭಂಡಾರ ಮನೆ, ಸತೀಶ್ ಮಳಿ, ಪವನ್ ಬೋಳದ ಪದವು, ಜಗದೀಶ್ ನೀರೋಳಿಕೆ, ಅಜಿತ್ ಬೋಳದ ಪದವು, ಅಲ್ಲದೆ ಯುವಕ ಮಂಡಲ ತೌಡುಗೋಳಿ, ಪ್ರಿಯದರ್ಶಿನಿ ಬೋಳದ ಪದವು, ಶಿವಾಜಿ ಬೋಳದ ಪದವು, ಬ್ರಹ್ಮ ಮುಗೇರ ಸೇವಾ ಸಮಿತಿ ಬೋಳದಪದವು ಸದಸ್ಯರು ಭಾಗವಹಿಸಿದ್ದರು.