ಸಿ.ಪಿ.ಐ ನೇತಾರ ಎಂ. ಕೃಷ್ಣ ಶೆಟ್ಟಿ ಯವರ 15 ನೇ ಅನುಸ್ಮರಣೆ ಕಾರ್ಯಕ್ರಮ.
ಜೂನ್ 23, 2024
0
ಸಿ.ಪಿ.ಐ ನೇತಾರ ಎಂ. ಕೃಷ್ಣ ಶೆಟ್ಟಿ ಯವರ 15 ನೇ ಅನುಸ್ಮರಣೆ ಕಾರ್ಯಕ್ರಮ.
ಮಂಜೇಶ್ವರ: ಸಿ.ಪಿ.ಐ ಮಂಜೇಶ್ವರ ಮಂಡಲ ಕಾರ್ಯದರ್ಶಿ, ಕಿಸಾನ್ ಸಭಾ ರಾಜ್ಯ ಸಮಿತಿ ಸದಸ್ಯ, ಮಜಿಬೈಲ್ ಬ್ಯಾಂಕ್ ಅಧ್ಯಕ್ಷರಾಗಿ ಹಲವು ವರ್ಷ ಸೇವೆ ಸಲ್ಲಿಸಿ ಹುತಾತ್ಮರಾದ ಧೀರ ಕಮ್ಯೂನಿಸ್ಟ್ ನೇತಾರ ಮೂಡಂಬೈಲು ನೀರುಳ್ಳಿ ಎಂ ಕೃಷ್ಣ ಶೆಟ್ಟಿ ರವರ 15ನೇ ಅನುಸ್ಮರಣೆ ಕಾರ್ಯಕ್ರಮ ಅವರ ನಿವಾಸದ ಸ್ಮೃತಿ ಮಂಟಪದಲ್ಲಿ ನಡೆಯಿತು. ಅನುಸ್ಮರಣ ಕಾರ್ಯಕ್ರಮವನ್ನು ಸಿ ಪಿ ಐ ರಾಜ್ಯ ಸಮಿತಿ ಸದಸ್ಯ ಟಿ ಕೃಷ್ಣನ್ ಉದ್ಘಾಟಿಸಿದರು. ಸಿ ಪಿ ಐ ಮೀಂಜ ಲೋಕಲ್ ಕಮಿಟಿ ಸದಸ್ಯ ಪಿ ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದರು ಲೋಕಲ್ ಕಮಿಟಿ ಸದಸ್ಯರಾದ ಉದಯ ಕುಮಾರ್ ಕರಿಬೈಲು, ಶರತ್ ಕುಮಾರ್ ಬೆಜ್ಜ, ಮುಸ್ತಫಾ ಕಡಂಬಾರ್, ಸತೀಶ್ ಪಜಿಂಗಾರ್, ಹರಿಜೀವನ್ ದಾಸ್, ಕಿಶೋರ್ ಕುಳುರ್, ಧರ್ಮಪತ್ನಿ ಸರೋಜಿನಿ, ಮಗಳು ಶಶಿಕಲಾ, ಅಳಿಯ ಗಣೇಶ ಹಾಗೂ ಕುಟುಂಬದ ಸದಸ್ಯರು ಭಾಗವಹಿಸಿದರು.
ಸಿ ಪಿ ಐ ಮೀಂಜ ಲೋಕಲ್ ಕಾರ್ಯದರ್ಶಿ ಗಂಗಾಧರ ಕೊಡ್ಡೆ ಸ್ವಾಗತಿಸಿದರು.