ಮಂಜೇಶ್ವರ ಉಪಜಿಲ್ಲಾ ಶಾಸ್ತ್ರ ಮೇಳದಲ್ಲಿ ಗಮನ ಸೆಳೆದ "ಮರಕ್ಕೆ ಹಗ್ಗ ಹಾಕುವ ಯಂತ್ರ".
ಅಕ್ಟೋಬರ್ 28, 2024
0
ಮಂಜೇಶ್ವರ ಉಪಜಿಲ್ಲಾ ಶಾಸ್ತ್ರ ಮೇಳದಲ್ಲಿ ಗಮನ ಸೆಳೆದ "ಮರಕ್ಕೆ ಹಗ್ಗ ಹಾಕುವ ಯಂತ್ರ".
ಮಂಜೇಶ್ವರ: ಕಳಿಯೂರು ಸೈಂಟ್ ಜೋಸೆಫ್ ಯು.ಪಿ ಶಾಲೆಯಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಸ್ತ್ರ ಮೇಳದಲ್ಲಿ ಮೀಯಪದವು ಯು.ಪಿ ಶಾಲಾ ಮಕ್ಕಳು ತಯಾರಿಸಿದ "ಮರಕ್ಕೆ ಹಗ್ಗ ಹಾಕುವ ಸುಲಭ ಯಂತ್ರ" ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಈ ಉಪಕರಣವು ಸಮಾಜದಲ್ಲಿ ಕೆಲಸ ಮಾಡುವ ಕೃಷಿ ಕಾರ್ಮಿಕರಿಗೆ, ಕೇಬಲ್ ಆಪರೇಟರ್ ಗಳಿಗೆ ಆಶಾದಾಯಕವಾಗಿದ್ದು , ಕಡಿಮೆ ಖರ್ಚಿನಲ್ಲಿ ಮಾಡಲು ಸಾಧ್ಯವಿದೆ. ಇಂತಹಾ ಉಪಕರಣಗಳು ಸಮಾನ್ಯ ಜನರಿಗೆ ಪ್ರಯೋಜನವಾದರೆ ವಿವಿಧ ಮೇಳಗಳು ನಿಜವಾದ ಅರ್ಥದಲ್ಲಿ ಯಶಸ್ವಿಯಾದಂತೆ. ತಲೆಯ ಮೇಲೆ ಶಿರಕವಚ ಧರಿಸಿದ ಮಕ್ಕಳು ವಿವರಿಸುವುದು ಎಲ್ಲರ ಗಮನ ಸೆಳೆಯಿತು.