ಹೊಸಬೆಟ್ಟು ಅಳಿವೆ ಬಾಗಿಲಿನಲ್ಲಿ ಉದ್ಯಾವರ ಶ್ರೀ ದೈವಗಳ ಭೇಟಿ ಮತ್ತು ಶ್ರೀ ಬೊಬ್ಬರ್ಯ ದೈವದ ಜಾತ್ರೆ ಹಾಗೂ ಶ್ರೀ ಭಗವತೀ ಮಾತೆಯ ಹೂಮುಡಿ ಮಹೋತ್ಸವ ಸಂಪನ್ನ.
ಜನವರಿ 14, 2025
0
ಹೊಸಬೆಟ್ಟು ಅಳಿವೆ ಬಾಗಿಲಿನಲ್ಲಿ ಉದ್ಯಾವರ ಶ್ರೀ ದೈವಗಳ ಭೇಟಿ ಮತ್ತು ಶ್ರೀ ಬೊಬ್ಬರ್ಯ ದೈವದ ಜಾತ್ರೆ ಹಾಗೂ ಶ್ರೀ ಭಗವತೀ ಮಾತೆಯ ಹೂಮುಡಿ ಮಹೋತ್ಸವ ಸಂಪನ್ನ.
ಮಂಜೇಶ್ವರ: ಮಂಜೇಶ್ವರ ಹೊಸಬೆಟ್ಟು ಸಮುದ್ರ ತೀರದ ಅಳಿವೆ ಬಾಗಿಲಿನಲ್ಲಿ ವರ್ಷಂಪ್ರತಿ ಜರಗುವ ಉದ್ಯಾವರ ಶ್ರೀ ದೈವಗಳ ಭೇಟಿ ಮತ್ತು ಶ್ರೀ ಬೊಬ್ಬರ್ಯ ದೈವದ ಜಾತ್ರೆ ಹಾಗೂ ಶ್ರೀ ಭಗವತೀ ಮಾತೆಯ ಹೂಮುಡಿ ಮಹೋತ್ಸವ ನಿನ್ನೆ ರಾತ್ರಿ ಸಂಪನ್ನಗೊಂಡಿತು. ಸಂಜೆ 4 ಕ್ಕೆ ಉದ್ಯಾವರ ಮಾಡ ಕ್ಷೇತ್ರದಿಂದ ಭಂಡಾರ ಆಗಮಿಸಿ, ಉದ್ಯಾವರ ದೈವಗಳ ಭೇಟಿಯೊಂದಿಗೆ ಶ್ರೀ ಬೊಬ್ಬರ್ಯ ದೈವದ ಜಾತ್ರೆ ಹಾಗೂ ಶ್ರೀ ಭಗವತೀ ಮಾತೆಯ ಹೂಮುಡಿ ಉತ್ಸವ ನೆರವೇರಿತು. ಸಹಸ್ರಾರು ಮಂದಿ ಭಕ್ತರು ಹಾಗೂ ಪರಿಸರದ ಮುಸಲ್ಮಾನ ಬಾಂಧವರು ಉತ್ಸವ ವೀಕ್ಷಿಸಿ, ದೇವರ ಅನುಗ್ರಹದ ಗಂಧ ಪ್ರಸಾದ ಸ್ವೀಕರಿಸಿದರು.
ಚಿತ್ರಗಳು: ಪವನ್ ಆಚಾರ್ಯ ಮೋರ್ಕಳ.