ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕಿನ 5 ವರ್ಷ ಆಡಳಿತ ಮಂಡಳಿಗೆ ಅವಿರೋಧ ಆಯ್ಕೆ.
ಡಿಸೆಂಬರ್ 21, 2023
0
ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕಿನ 5 ವರ್ಷ ಆಡಳಿತ ಮಂಡಳಿಗೆ ಅವಿರೋಧ ಆಯ್ಕೆ.
ಮಂಜೇಶ್ವರ: ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕಿನ ಮುಂದಿನ 5 ವರ್ಷದ ಅವಧಿಗೆ ನೂತನ ಆಡಳಿತ ಮಂಡಳಿಯನ್ನು ಬ್ಯಾಂಕಿನ ಮಹಾಸಭೆಯು ಅವಿರೋಧವಾಗಿ ಆಯ್ಕೆ ಮಾಡಿತು. ಬ್ಯಾಂಕಿನ ಅಧ್ಯಕ್ಷರಾಗಿ ಎಸ್. ರಾಮಚಂದ್ರ ಬಡಾಜೆ ಹಾಗೂ ಉಪಾಧ್ಯಕ್ಷರಾಗಿ ವಿಜಯ ಕನಿಲ ಮತ್ತು ನಿರ್ದೇಶಕರಾಗಿ ಗಣೇಶ್ ಸಿ.ಎಚ್, ಯತೀಶ್ ಕಾಜೂರ್, ಡಾ|| ಕೆ.ಎ ಖಾದರ್, ಗಂಗಾಧರ. ಕೆ, ಎಚ್. ಗಂಗಾಧರ, ಕೆ.ಕೆ ರಾಮಚಂದ್ರ ಕಣ್ವತೀರ್ಥ, ಸೇಸಮ್ಮ ಉದ್ಯಾವರ, ನಾರಾಯಣಿ ರಾಜನ್, ರೇಖಾ ಕೀರ್ತೇಶ್ವರ ಮೊದಲಾದವರು ಆಯ್ಕೆಯಾದರು. ನೂತನ ಆಡಳಿತ ಮಂಡಳಿಯನ್ನು ಬ್ಯಾಂಕ್ ಸದಸ್ಯರು ಮತ್ತು ಸಿಬ್ಬಂದಿವರ್ಗದವರು ಅಭಿನಂದಿಸಿದ್ದಾರೆ.