ಕನ್ನಡ ಸಂಘ ಕೊಚ್ಚಿನ್ ವತಿಯಿಂದ ರಾಜ್ಯೋತ್ಸವ ಹಾಗೂ ದೀಪಾವಳಿ ಆಚರಣೆ.
ನವೆಂಬರ್ 27, 2023
0
ಕನ್ನಡ ಸಂಘ ಕೊಚ್ಚಿನ್ ವತಿಯಿಂದ ರಾಜ್ಯೋತ್ಸವ ಹಾಗೂ ದೀಪಾವಳಿ ಆಚರಣೆ.
ಕೊಚ್ಚಿ :ಕೇರಳದ ಹಿರಿಯ ಕನ್ನಡ ಪರ ಸಂಸ್ಥೆ ಕನ್ನಡ ಸಂಘ ಕೊಚ್ಚಿನ್ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಹಾಗೂ ದೀಪಾವಳಿ ಆಚರಣೆಯನ್ನು ಸಂಘದ ಕಚೇರಿಯಲ್ಲಿ ಆಚರಿಸಲಾಯಿತು
ಹಿರಿಯ ಕನ್ನಡ ಸಂಘಟಕ ಹಾಗೂ ಕೊಚ್ಚಿನ್ ಕನ್ನಡ ಸಂಘದ ಮಾಜಿ ಅಧ್ಯಕ್ಷ ಶ್ರೀಕಾಂತ ಆನವಟ್ಟಿ ಉದ್ಘಾಟಿಸಿ ಮಾತನಾಡಿ ಕನ್ನಡಿಗರು ಎಲ್ಲೇ ಇರಲಿ ಜನ್ಮಭೂಮಿ ಕರ್ನಾಟಕದ ರಾಜ್ಯೋತ್ಸವವನ್ನು ಆಚರಿಸುದು ಅತ್ಯಾವಶ್ಯ ಈ ಮೂಲಕ ಕನ್ನಡ ನಾಡು ನುಡಿಗೆ ಕಿಂಚಿತ್ತು ಸೇವೆ ಸಲ್ಲಿಸಿದಂತಾಗಿದೆ ಎಂದರು ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಚ್ಚಿನ್ ಕನ್ನಡ ಸಂಘದ ಅಧ್ಯಕ್ಷ ಡಿ ಶ್ರೀನಿವಾಸ ರಾವ್ ಭಾರತ ದೇಶದ ಅಭಿವೃದ್ಧಿಗೆ ಕರ್ನಾಟಕದ ಕೊಡುಗೆಯನ್ನು ಪ್ರಸ್ತಾವಿಸಿ, ಜನ್ಮ ಭೂಮಿಯಾದ ಕರ್ನಾಟಕವನ್ನು ಬಿಟ್ಟು ಕರ್ಮಭೂಮಿಯಾದ ಕೊಚ್ಚಿನ್ ಮಹಾನಗರದಲ್ಲಿ ವಾಸಿಸುವ ಕನ್ನಡಿಗರು ಇಲ್ಲಿನ ಭಾಷಾ ಸೌಹಾರ್ದತೆಗೆ ಸಲ್ಲಿಸುತ್ತಿರುವ ಕೊಡುಗೆಗೆ ಮೆಚ್ಚುಗೆ ವ್ಯಕ್ತಪಡಿಸಿದರು ಹಿರಿಯ ಕನ್ನಡ ಸಂಘಟಕ ಗಿರೀಶ್ ಪಡ್ಕೆ ರಾಜ್ಯೋತ್ಸವ ಸಂದೇಶ ಹಾಗೂ ಲೇಖಕಿ ಕೊಚ್ಚಿನ್ ಕನ್ನಡ ಸಂಘದ ಜೊತೆ ಕಾರ್ಯದರ್ಶಿ ಪರಿಣಿತ ರವಿ ದೀಪಾವಳಿ ಸಂದೇಶ ನೀಡಿದರು
ಹಿರಿಯ ಕನ್ನಡಿಗ ಕೊಚ್ಚಿನ್ ಕನ್ನಡ ಸಂಘದ ಮಾಜಿ ಅಧ್ಯಕ್ಷ ಶ್ರೀಕಾಂತ ಕೌಡಿ ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆಗೈದರು ನಗರದ ಹಿರಿಯ ವೈದ್ಯ, 2023ನೇ ಸಾಲಿನ ಶ್ರೇಷ್ಠ ಕನ್ನಡಿಗ ಪ್ರಶಸ್ತಿ ಪುರಸ್ಕೃತ ಡಾ ಮಲ್ಲಿಕಾರ್ಜುನ ಎಸ್ ನಾಸಿ ಅತಿಥಿಗಳನ್ನು ಸನ್ಮಾನಿಸಿದರು.ಮೆಡಿಕಲ್ ಟ್ರಸ್ಟ್ ಆಸ್ಪತ್ರೆ ಕೊಚ್ಚಿನ್ ನ ಹಿರಿಯ ವೈದ್ಯ ಡಾ ಭಾಸ್ಕರ್ ರಾವ್, ಆರ್ಥಿಕ ತಜ್ಞ ಪಿ ಕೆ ಕೃಷ್ಣಮೂರ್ತಿ ಮುಖ್ಯ ಅತಿಥಿಗಳಾಗಿ ಭಾಗವಸಿದರು, ಜಗನಾಥ, ತ್ಯಾಗರಾಜ್,ಸುನಂದಾ ಆನವಟ್ಟಿ, ಸುಭಾಷ್ ಗೌಡ,ನಾಗರಾಜ್, ವೆಂಕಟೇಶ್,ರವಿ, ಮೋಹನ್, ಗಂಗಾಧರ,ಸೋಮನಾಥ ಕೌಡಿ,ಮಹೇಶ್ ಮಟ್ಟಾನ್ಚೇರಿ ಮುಂತಾದವರು ಉಪಸ್ಥಿತರಿದ್ದರು, ಸಂಘದ ಮಾಜಿ ಅಧ್ಯಕ್ಷ ವಿಜಯ ಕುಮಾರ ತಂತ್ರಿ ಕನ್ನಡ ಧ್ವಜಾರೋಹಣಗೈದರು ಸಂಘದ ಪ್ರಧಾನ ಕಾರ್ಯದರ್ಶಿ ಹರೀಶ್ ಸ್ವಾಗತಿಸಿ ಕೋಶಾಧಿಕಾರಿ ವಿಷ್ಣು ತಂತ್ರ ವಂದಿಸಿದರು, ಜ್ಯೋತಿ ತಂತ್ರಿ ಹಾಗೂ ರಾಜಲಕ್ಷ್ಮಿ ಕಾರ್ಯಕ್ರಮ ನಿರ್ವಹಿಸಿದರು