ತೂಮಿನಾಡು: ರಿಕ್ಷಾ ಚಾಲಕ ಶರತ್ (39) ಡೆಂಗ್ಯೂ ಜ್ವರದಿಂದ ಮೃತ್ಯು.
ಜೂನ್ 04, 2024
0
ತೂಮಿನಾಡು: ರಿಕ್ಷಾ ಚಾಲಕ ಶರತ್ (39) ಡೆಂಗ್ಯೂ ಜ್ವರದಿಂದ ಮೃತ್ಯು.
ಮಂಜೇಶ್ವರ: ಕಳೆದ ಒಂದು ವಾರದಿಂದ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬಳಿಯ ನಿವಾಸಿಯೂ, ತೂಮಿನಾಡಿನಲ್ಲಿ ರಿಕ್ಷಾ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದ ಶರತ್ (39) ಜ್ವರ ಉಲ್ಬಣಿಸಿ ಇಂದು ಬೆಳಗ್ಗೆ ಆಸ್ಪತ್ರೆಗೆ ತೆರಳುವ ವೇಳೆ ನಿಧನರಾದರು. ಮೃತರು ಈ ಮೊದಲು ಕುಂಜತ್ತೂರು ನಲ್ಲಿ ವಾಸಿಸುತ್ತಿದ್ದು, ಕಳೆದ 2 ವರ್ಷಗಳ ಹಿಂದೆ ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪರಿಸರದಲ್ಲಿ ಜಾಗೆ ತೆಗೆದು, ಮನೆ ಕಟ್ಟಿ, ಪತ್ನಿ ಮಕ್ಕಳ ಜೊತೆ ವಾಸಿಸುತ್ತಿದ್ದರು. ಮೃತರು ದಿ. ಸುಕುಮಾರ ಟೈಲರ್ - ರಾದ ದಂಪತಿ ಪುತ್ರನಾಗಿದ್ದು, ಪತ್ನಿ: ಮಮತಾ, ಮಕ್ಕಳಾದ ಧನ್ಯ ಶ್ರೀ, ಯತೀನ್, ಸಹೋದರರಾದ: ಸಚಿನ್, ಶೈಲೇಶ್, ಸುಮಂತ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಸಹೋದರ ವಿದೇಶದಲ್ಲಿದ್ದು, ಇಂದು ಸಂಜೆ ಮನೆಗೆ ಆಗಮಿಸಿದ ಬಳಿಕ ಅಂತ್ಯ ಕ್ರಿಯೆಯ ಕಾರ್ಯಗಳು ನಡೆಯಲಿದೆ.